ಡಾ. ಜೇಮ್ಸ್ ಬರ್ಜಸ್
ಭಾರತೀಯ ಪುರಾತತ್ವ ಶಾಸ್ತ್ರದ ಅಧ್ವರ್ಯುಗಳಲ್ಲಿ ಒಬ್ಬರು.
೧೮೩೨ರಲ್ಲಿ ಇಂಗ್ಲಂಡಿನಲ್ಲಿ
ಜನಿಸಿದ್ದ ಡಾ. ಬರ್ಜಸ್, ಭಾರತಕ್ಕೆ ಬಂದು ಶಿಕ್ಷಣ ಇಲಾಖೆಯಲ್ಲಿ ಮೊದಲು ಕಲಕತ್ತೆಯಲ್ಲಿ, ನಂತರ ಮುಂಬೈಯಲ್ಲಿ
ಕೆಲಸಮಾಡತೊಡಗಿದ್ದರು. ಆದರೆ ಈ ದೇಶದ ಅಗಾಧ ಪ್ರಾಚ್ಯ ಸಿರಿಯನ್ನು ನೋಡಿ, ಅವರಿಗೆ ಇತಿಹಾಸ-ಪ್ರಾಚ್ಯಶಾಸ್ತ್ರದಲ್ಲಿ
ಆಸಕ್ತಿ ಹುಟ್ಟಿತು. ೧೮೭೨ರಲ್ಲಿ ಅವರು “ದಿ ಇಂಡಿಯನ್ ಆಂಟಿಕ್ವರಿ” ಎಂಬ ಖ್ಯಾತ ಪತ್ರಿಕೆಯನ್ನು ಸ್ಥಾಪಿಸಿದರು.
ಹದಿಮೂರು ವರ್ಷಗಳ ಕಾಲ ಅದನ್ನು ನಡೆಸಿ, ಅದಕ್ಕೊಂದು ಭದ್ರ ಬುನಾದಿ ಹಾಕಿ ಕೊಟ್ಟರು. ಆ ಪತ್ರಿಕೆಯನ್ನು
ಮುಂದೆ ಡಾ.ಫ್ಲೀಟ್, ಸರ್. ರಿಚರ್ಡ್ ಟೆಂಪಲ್ ಮುಂತಾದ ಪ್ರಬೃತಿಗಳು ನಡೆಸಿ ಅದಕ್ಕೆ ದೊಡ್ಡ ಹೆಸರು
ತಂದು ಕೊಟ್ಟರು.
೧೮೭೩ರಲ್ಲಿ ಸರಕಾರ
ಡಾ. ಬರ್ಜಸ್ ಅವರ ಆಸಕ್ತಿ-ಅಧ್ಯಯನ ಗಮನಿಸಿ ಅವರನ್ನು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ
ಪಶ್ಚಿಮ ಭಾರತದ ಮುಖ್ಯಸ್ಥರನ್ನಾಗಿ ನೇಮಿಸಿತು. ವೃತ್ತಿ-ಪ್ರವೃತ್ತಿ ಒಂದೇಯಾದ ನಂತರ ಡಾ. ಬರ್ಜಸ್
ಆಸಕ್ತಿಯಿಂದ ಕೆಲಸ ಶುರುಮಾಡಿದರು, ಮೊಟ್ಟಮೊದಲಿಗೆ ಬಾಂಬೆ ಕರ್ನಾಟಕದ ಜಿಲ್ಲೆಗಳ ಪ್ರಾಚ್ಯ ಸರ್ವೇಕ್ಷಣ
ಶುರುಮಾಡಿದರು – ಜನೇವರಿ ೧೫- ಮೇ ೧೮೭೪ರ ವರೆಗೆ ನಡೆದ ಸರ್ವೆಯ ವರದಿಯು ಜಾಲತಾಣದಲ್ಲಿ ಲಭ್ಯವಿದೆ
- Report Of The
First Seasons Operations In The Belgam and Kaladgi Districts January To May
1874.
ಸಂಪಗಾವ್-ಬೈಲಹೊಂಗಲ-ಸವದತ್ತಿ-ಯಲ್ಲಮ್ಮನಗುಡ್ಡಗಳ ಸರ್ವೇಕ್ಷಣ ಮಾಡಿ ೧೮೭೪, ಫೆಬ್ರುವರಿ ೨೭ರಂದು ಹೂಲಿಗೆ ಬಂದ ಡಾ. ಬರ್ಜಸ್, ಇಲ್ಲಿಯ ಗುಡಿಗಳ ಅಭ್ಯಾಸ ಮಾಡಿ, ಫೋಟೋ ತೆಗೆದುಕೊಂಡರು. ಅವರು ಪ್ರಕಟಿಸಿದ ವರದಿಯಲ್ಲಿರುವ ಹೂಲಿಯ ಪಂಚಲಿಂಗಪ್ಪನ ಗುಡಿಯ ಚಿತ್ರ
ಮತ್ತು ನಕಾಶೆ:
ಡಾ. ಬರ್ಜಸ್ ಅವರು
ತೆಗೆದ ಹೂಲಿಯ ಗುಡಿಗಳ ಚಿತ್ರಗಳನ್ನು ಬ್ರಿಟೀಷ್ ಲೈಬ್ರರಿಯವರು ಜಾಲತಾಣದಲ್ಲಿ ಒದಗಿಸಿದ್ದಾರೆ -
ಲಿಂಕ್.
ನೂರೈವತ್ತು ವರ್ಷಗಳ ಹಳೆಯ ಹೂಲಿಯ ಆ ಫೋಟೋಗಳು ನಿಮ್ಮ ಅವಗಾಹನೆಗಾಗಿ:
ಪಂಚಲಿಂಗಪ್ಪನ ಗುಡಿಯ
ಪೂರ್ವದ ನೋಟ ಮತ್ತು ಉತ್ತರದ ನೋಟ:
(ವರದಿಯಲ್ಲಿ ಇದೇ ಚಿತ್ರದ ʼಬ್ಲಾಕ್ʼ ಅನ್ನು ಮುದ್ರಿಸಲಾಗಿದೆ)
ಕೆರೆದಂಡೆಯ ಅಂಧಕೇಶ್ವರ
ಗುಡಿ(?),
ಕೆರೆದಂಡೆಯ ಭೀಮೇಶ್ವರ
ಗುಡಿ(?)
ಗುಡ್ಡದಲ್ಲಿರುವ ತಾರಕೇಶ್ವರ ಗುಡಿ:
(ಡಾ. ಬರ್ಜಸ್ರವರು ಉತ್ತರೋತ್ತರವಾಗಿ ಆರ್ಕಿಲಾಗಿಕಲ್ ಸರ್ವೆ ಆಫ್ ಇಂಡಿಯಾದ ಡೈರೆಕ್ಟರ್ ಜನರಲ್ ಆಗಿ, ಎಪಿಗಾಫ್ರಿಯಾ ಇಂಡಿಕಾ ಸಂಪುಟಗಳ ಸರಣಿ ಶುರುಮಾಡಿ, ಅದಲ್ಲದೇ ಸ್ವತಃ ಹಲವಾರು ಸಂಶೋಧನೆ ಮಾಡಿ, ಹಲವು ಪುಸ್ತಕಗಳನ್ನು ಪ್ರಕಟಿಸಿ ಭಾರತೀಯ ಪುರಾತತ್ವಶಾಸ್ತ್ರಕ್ಕೆ ಉಪಕಾರಮಾಡಿದ್ದಾರೆ)
No comments:
Post a Comment